ಎಲ್ಲ ರಸ್ತೆಗಳೂ ನಗರಗಳತ್ತ ಮುಖ ಮಾಡಿವೆ. ಸಮವಸ್ತ್ರ ತೊಟ್ಟ ಮಕ್ಕಳನ್ನು ಹೊತ್ತ ವಾಹನಗಳು ಮಣ್ಣು ರಸ್ತೆಯಿಂದ ಜಲ್ಲಿ ರಸ್ತೆಗೆ ನಂತರ ಟಾರು ರಸ್ತೆಗೆ ತಲುಪಿ ಕಾನ್ವೆಂಟ್ ಗಳತ್ತ ಹೋಗುತ್ತಿವೆ. ಟಿಫನ್ ಕ್ಯಾರಿಯರ್ ತುಂಬಿಕೊಂಡ ಬ್ಯಾಗ್ ಹೊತ್ತ ಜನ ಕೆಲಸಕ್ಕೆ ನಗರಕ್ಕೆ ಹೋಗುವ ಬಸ್ ಹತ್ತುತ್ತಿದ್ದಾರೆ. ನಗರವನ್ನು ಸಂಪರ್ಕಿಸುವ ರಸ್ತೆ ಹಳ್ಳಿಗಳತ್ತಲೂ ಹೋಗುತ್ತದೆ ಎನ್ನುತ್ತಾರೆ. ಇದು ಹಾಗಲ್ಲ. ಬೆಟ್ಟದಲ್ಲಿ ಹುಟ್ಟಿದ ನದಿ ಸಮುದ್ರದ ಕಡೆ ಹೋಗುವ ಹಾಗೆ ಅನ್ನಿಸುತ್ತಿಲ್ಲವೇ ? ಮೊಳಕೆಯೊಡೆದ ಚಿಗುರು ಬೆಳಕಿನೆಡೆ ಮುಖ ಎತ್ತಿ ಮೇಲು ಮೇಲಕ್ಕೆ ಬೆಳೆಯುತ್ತ ಗಗನದೆಡೆ ಕತ್ತು ಚಾಚಿದ ಹಾಗೆಯೇ ? ಅಂಥ ಚಿಗುರಿಗೆ ಬೇರಿನ ಮೂಲಕ ನೆಲದ ನಂಟು ಬೇಕೇ ಬೇಕು. ಆದರೆ ನಗರಕ್ಕೆ ಹೊರಟ ಮನುಷ್ಯನಿಗೆ............... ಒಂದೆಡೆ ಈ ವಲಸೆಯನ್ನು ತಡೆದು ಭುವಿಯ, ಬದುಕಿನ ಸ್ವಾಸ್ಥ್ಯವನ್ನು ಕಾಪಾಡಬಹುದಾದ ವ್ಯವಸ್ಥೆಗೆ ಅದರಲ್ಲಿ ಆಸಕ್ತಿ, ಪುರುಸೊತ್ತಿಲ್ಲ. ಇನ್ನು ಇದರಿಂದ ಲಾಭ ಪಡೆಯುವ ಹಿತಾಸಕ್ತಿಗಳು ತಮ್ಮೆಲ್ಲ ಶ್ರಮ ವಹಿಸಿ ದುಡಿಯುತ್ತಿವೆ. ಅಥವಾ ಅಂಥ ಹಿತಾಸಕ್ತಿಗಳ ಕೈಯಲ್ಲೇ ವ್ಯವಸ್ಥೆ ಇದೆಯೇ ?......
No comments:
Post a Comment