Friday, 28 February 2014

ಡಾಂಭಿಕತೆ

'ನನ್ನ ತಾಯಿ ನಿನ್ನೆ ಸತ್ತು ಹೋದಳು. ಇಲ್ಲ ನಿನ್ನೆ ಅಲ್ಲ ಮೊನ್ನೆ ಇರಬೇಕು' ಹೀಗೆ ಶುರುವಾಗುತ್ತದೆ ಅಸಂಗತವಾದದ ಜನಕ ಅಲ್ಬರ್ಟ್ ಕಾಮುವಿನ ಕಾದಂಬರಿ ದಿ ಔಟ್ ಸೈಡರ್‍, ಎಂದು ಟಿ. ಪಿ. ಅಶೋಕರ 'ನವ್ಯ ಕಾವ್ಯದ ಪ್ರೇರಣೆಗಳು' ಎಂಬ ಪುಸ್ತಕದಲ್ಲಿ ಓದಿದ ನೆನಪು. ಈ ಸಮಾಜದ ಡಾಂಭಿಕತೆಯನ್ನು ವಿಡಂಬಿಸುವ ಕಾದಂಬರಿ ಅದು. ನಾವು ನಮ್ಮ ನಿಜವಾದ ಭಾವನೆಗಳನ್ನು ಅದುಮಿ ಸುಳ್ಳು ಸುಳ್ಳೇ ನಟಿಸುತ್ತ ಬದುಕುತ್ತಿರುತ್ತೇವೆ. ಆದರೆ ಇಷ್ಟು ಬರಡಾಗಿ ಬದುಕುವುದು ಸಾದ್ಯವಿಲ್ಲದಿದ್ದರೂ, ಸಹಜವಾಗಿ ಬದುಕುವುದೂ ಕಷ್ಟವಾಗಿದೆ. ಬೆತ್ತಲಾಗುವುದಿರಲಿ ಅರೆಬೆತ್ತಲಾದರೂ ಸುತ್ತ ಮುಖವಾಡ ಧರಿಸಿದವರು ನಮ್ಮ ಪಾಡಿಗೆ ಇರಲು ಬಿಡಲಾರರು. ಜಗವೇ ನಾಟಕ ರಂಗ ಎಂಬುದು ಈ ಅರ್ಥದಲ್ಲಿ ಸರಿ ಎನಿಸುತ್ತದೆ.. ಬರಬರುತ್ತ  ನಿಜ ಮುಖ ಯಾವುದು, ಮುಖವಾಡ ಯಾವುದು ಎಂಬುದೇ ತಿಳಿಯದಂತಾಗಿದೆ.......

No comments:

Post a Comment