Thursday, 8 October 2015

ಯಾವ ಸಂದೇಶ





ಮೋದಿ ಈಗ ಭಾರತದ ನಂ. ಒನ್ ಸೆಲೆಬ್ರಿಟಿ. ಒಂದು ರೀತಿಯಲ್ಲಿ ಭಾರತದ ಪ್ರಚಾರ ರಾಯಭಾರಿ. ಅವರು ಮಾಡಿದ್ದೆಲ್ಲ ಅದ್ಧೂರಿ ಹಾಗೂ ಸುದ್ದಿ. ಅವರನ್ನು ಅವರಷ್ಟೆ ಅಥವಾ ಅವರಿಗಿಂತ ಹೆಚ್ಚು ಸಮರ್ಥಿಸಿಕೊಳ್ಳಬಲ್ಲ ಒಂದು ದೊಡ್ಡ ಪಡೆಯೇ ದೇಶದಾದ್ಯಂತ ಇದೆ. ಅದು ವೃತ್ತಿ ಪರ ರಾಜಕೀಯ ವಲಯದಿಂದ ಹೊರತು ಪಡಿಸಿದ್ದು. ಅವರೀಗ ಅವರ ಸರ್ಕಾರದ ಏಕೈಕ ಶಕ್ತಿ ಕೇಂದ್ರ ಅಂದುಕೊಳ್ಳಲಾಗಿತ್ತು. ಆದರೆ ಈಗ ನೋಡಿ ಅವರು ದೇಶವಾಸಿಗಳಿಗೆ ರಾಷ್ಟ್ರಪತಿ ಪ್ರಣವಮುಖರ್ಜಿಯವರ (ಕೋಮು ಸೌಹಾರ್ದ ಕುರಿತಂತೆ) ಮಾತುಗಳನ್ನು ಪಾಲಿಸುವಂತೆ ಕರೆ ನೀಡುತ್ತಾರೆ. ಅವರು ಮುಂದುವರಿದು ಸಣ್ಣ ಪುಟ್ಟ ರಾಜಕಾರಣಿಗಳ ಬೇಜವಾಬ್ದಾರಿ ಮಾತುಗಳಿಗೆ ಕಿವಿಗೊಡಬೇಡಿ ಎನ್ನುತ್ತಾರೆ. ಅಂದರೆ, ಮೋದೀಜಿ ಈಗ ಅದೇ ಅವರ ಪಕ್ಷದ ಬೇಜವಾಬ್ದಾರಿ ಮಾತುಗಳನ್ನು ಆಡುವವರನ್ನು ಹದ್ದು ಬಸ್ತಿನಲ್ಲಿಡುವ  ಶಕ್ತಿ ಹೊಂದಿಲ್ಲ ಎಂದರ್ಥವೇ ? ಅಥವಾ ಅಂಥ ಮಾತುಗಳನ್ನಾಡಲು ಬೇರೆ ಕಡೆಯಿಂದ ಸೂಚನೆಗಳು ಸಿಗುತ್ತಿವೆಯೇ ? ಮತ್ತು ಅಂಥ ಮೂಲಗಳು ಮೋದೀಜೀಗಿಂತ ಬಲವುಳ್ಳವೇ ? ಅಥವಾ ಒಂದು ಕಡೆ ತಾನು ಕೋಮು ಸೌಹಾರ್ದಕ್ಕೆ ಬದ್ದ ಎಂದು ತೋರಿಕೊಳ್ಳುತ್ತಾ ಅಂಥ ದೇಶವಾಸಿಗಳ ಮನ ಗೆಲ್ಲುತ್ತಾ, ಇನ್ನೊಂದು ಕಡೆ ತಮ್ಮ ಪಡೆಗಳ ಮೂಲಕ ತಮ್ಮ ಪಕ್ಷದ ನಿಷ್ಠಾವಂತರ  ಭಾವನೆಗಳನ್ನು ಪೋಷಿಸಿಕೊಂಡು ಬರಲಾಗುತ್ತಿದೆಯೇ ?
    ಮೋದೀಜಿಯ ಇನ್ನೊಂದು ಮಾತು : ರಾಷ್ಟ್ರಪತಿಯವರ ಸಂದೇಶಕ್ಕಿಂತ ದೊಡ್ಡ ಸಂದೇಶ, ದೊಡ್ಡ ಮಾರ್ಗಸೂಚಿ, ದೊಡ್ಡ ದಿಕ್ಸೂಚಿ ಬೇರೊಂದಿಲ್ಲ. ಈ ದಿಕ್ಕಿನಲ್ಲಿಯೇ ನಡೆದರೆ ವಿಶ್ವದ ನಿರೀಕ್ಷೆಗಳನ್ನು ಭಾರತ ಈಡೇರಿಸಬಲ್ಲದು. ಅಂದರೆ ಮೋದಿಯವರ ಗಮನ ಸಂಪೂರ್ಣವಾಗಿ ವಿಶ್ವದ ನಿರೀಕ್ಷೆಗಳನ್ನು ಈಡೇರಿಸುವುದರಲ್ಲಿಯೇ ಹೊರತು ಭಾರತ ದೇಶವಾಸಿಗಳದ್ದನ್ನಲ್ಲ.

No comments:

Post a Comment