ಕೇರಳಾ.......
ಕಳೆದ ೧೫ ಮತ್ತು ೧೬ ರಂದು ಎರಡು ದಿನ ಕೊಡಗಿನ ಗಡಿಯ ಕೇರಳದಲ್ಲಿ ಸುತ್ತಾಡುವ ಅವಕಾಶವೊದಗಿ ಬಂದಿತ್ತು. ವೀರಾಜಪೇಟಿಯಿಂದ ಘಾಟಿ ಇಳಿದರೆ ಇರಿಟ್ಟಿ ಎಂಬ ಊರು. ಅಲ್ಲಿಂದ ಸುಮಾರು ಮೂವತ್ತು ಕಿ.ಮೀ. ದೂರದ ಕರುವಂಚಾಲು ಕಡೆಗೆ ನಮ್ಮ ಪಯಣ. ಅಲ್ಲಿ ತೋಟದ ಮಧ್ಯದ ಮನೆಯೊಂದರಲ್ಲಿ ಅವತ್ತು ಉಳಿದುಕೊಳ್ಳುವ ಅವಕಾಶ. ಕೇರಳ ದೇವರ ಸ್ವಂತ ನಾಡು ಎಂಬ ಹೆಸರಿದೆ- ಅಲ್ಲಿಯ ಸುಂದರ ಪ್ರಕೃತಿಯಿಂದ. ನಮಗೂ ಎರಡು ದಿನ ಅಲ್ಲಿಯ ಸುಂದರ ಪರಿಸರದ ದರ್ಶನವಾಯಿತು. ಅದರಲ್ಲೂ ಆ ತೋಟದ ಮನೆಯಲ್ಲಿ ಸಂಜೆ ಐದು ಗಂಟೆಯಿಂದ ಮರುದಿನ ಬೆಳಿಗ್ಗೆ ಒಂಬತ್ತು ಗಂಟೆಯವರೆಗೂ ಧೋ... ಎಂದು ಸುರಿವ ಮಳೆಯನ್ನು ನೋಡುತ್ತಾ, ಭೋರ್ಗರೆತವನ್ನು ಕೇಳುತ್ತಾ (ಒಂದು ಲೋಟ ಬಿಸಿ ಬಿಸಿ ಕಾಫಿಯೂ ಇಲ್ಲದೇ) ಕಳೆದದ್ದು ಮರೆಯಲಾಗದ ಅನುಭವ. ಅಲ್ಲಿ ನಾನು ತೆಗೆದ ಕೆಲವು ಚಿತ್ರಗಳು ಇಲ್ಲಿವೆ. ಇವು ನಾನು ಪಡೆದ ಅನುಭವದ ಲವಲೇಷವನ್ನೂ ನಿಮಗೆ ತಲುಪಿಸಲಾರವು ಎಂದು ನನಗೆ ಗೊತ್ತಿದೆ. ಆದರೂ, ಇದು ನನಗಾದ ಅಪೂರ್ವ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾತ್ರ. ಅಲ್ಲೆಲ್ಲ ಓಡಾಡುತ್ತ, ನನಗೆ ಮತ್ತೆ ಮತ್ತೆ ನೆನಪಾದದ್ದು ಮೈಸೂರಿನ ಕವಿ ಕೆ. ನ. ಶಿವತೀರ್ಥನ್ ಅವರ ಈ ಸಾಲುಗಳು :
ಕೇರಳಾ ಕೇರಳಾ
ಏನಲ್ಲಿ ಹೇರಳಾ
ನಾರೀ ಕೇಳಾ
.......
No comments:
Post a Comment