ಇದು ನಮ್ಮ ಅಂಗಡಿಯ ಎದುರಿಗಿರುವ ಮರದ ಮೂರು ಚಿತ್ರಗಳು. ಮೊದಲನೆಯದು ಈ ತಿಂಗಳ ೩ ರಂದು ತೆಗೆದಿದ್ದು. ಬೇಸಿಗೆ ಬಿಸಿಲಿಗೆ ಬಾಡಿ ಹೋದ ಎಲೆಗಳು. ಉರಿ ತಾಳಲಾರದೇ ಇನ್ನೇನು ಎಲೆಗಳೆಲ್ಲ ಉದುರುವ ಸ್ಥಿತಿಯಲ್ಲಿವೆ. ಎರಡನೆಯ ಚಿತ್ರ ೨೦ ನೇ ತಾರೀಖಿನದು, ಇರುವ ಎಲ್ಲ ಎಲೆಗಳಿಗೆ ನೀರು ಒದಗಿಸಲಾರದೇ ತನ್ನೆಲ್ಲ ಎಲೆಗಳನ್ನು ಉದುರಿಸಿಕೊಂಡು ನಿಂತ ಮರ. ನಂತರದ್ದು ನೋಡಿ ೨೪ ನೇ ತಾರೀಖು ತೆಗೆದದ್ದು. ನವ ಮನ್ವಂಥರದ ಚೈತ್ರನನ್ನು ಸ್ವಾಗತಿಸಲು ಸಜ್ಜಾಗಿ ಚಿಗುರಿ ನಿಂತ ಮರ.......
ಪ್ರಕೃತಿ ತನ್ನ ಇಂಥ ಕೆಲವು ಕೆಲಸಗಳಿಂದ ನಮಗೆ ಏನೇನೋ ಪಾಠಗಳನ್ನು ಹೇಳುತ್ತಿರುವಂತಿದೆ. ಆದರೆ, ದುರಹಂಕಾರಿ ಮನುಷ್ಯ ಏನನ್ನೂ ಕೇಳಿಸಿಕೊಳ್ಳಲಾರೆ ಎನ್ನುತ್ತಿದ್ದಾನೆ... ಭೂಮಿಯ ಶಾಖವನ್ನು ಕಡಿಮೆ ಮಾಡಲು ಮೀಟಿಂಗ್ ಮೇಲೆ ಮೀಟಿಂಗ್ ಮಾಡಿ ಹೈರಾಣಾಗುತ್ತಿದ್ದಾನೆ..
ತಾಗುವುದಕ್ಕೆ ಮುನ್ನ ಬಾಗುವುದು ಮೇಲು ಎನ್ನುತ್ತಾರೆ.... ಊಹ್ಞೂ... ನಾವು ಬಾಗುವುದೇ ಇಲ್ಲ ಸರ್ವನಾಶವಾಗುವವರೆಗೂ.....